kanada test story

Lifestyle
Shariff: 

kanada test story

ದಾವಣಗೆರೆ: ನಗರದಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು,  3001ಚಿಕ್ಕ ಬೆಳ್ಳಿ ಗಣೇಶ ಮೂರ್ತಿಗಳನ್ನು ಒಳಗೊಂಡ 12 ಅಡಿ ಎತ್ತರದ ವಿಶಿಷ್ಟ ಗಣೇಶ ಮೂರ್ತಿ ಆಕರ್ಷಕವಾಗಿದೆ.

ಎಂಸಿಸಿ ‘ಎ’ ಬ್ಲಾಕ್‌ನ ಹಿಂದೂ ಯುವ ಶಕ್ತಿ ಸಂಘಟನೆಯು ಇಲ್ಲಿನ ತೊಗಟವೀರ ಸಮುದಾಯ ಭವನದಲ್ಲಿ 3001ಚಿಕ್ಕ ಬೆಳ್ಳಿ ಗಣೇಶ ಮೂರ್ತಿಗಳನ್ನು ಒಳಗೊಂಡ 12 ಅಡಿ ಎತ್ತರದ ವಿಶಿಷ್ಟ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದೆ.

ವಿನೋಬ ನಗರದ 1ನೇ ಮುಖ್ಯರಸ್ತೆಯಲ್ಲಿ ಹ್ಯಾಪಿ ಫ್ರೆಂಡ್ಸ್‌ ಗ್ರೂಪ್‌ ‘ಮಹರಾಜ ಗಣಪತಿ’ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಪಿ.ಜೆ.ಬಡಾವಣೆ ಚರ್ಚ್‌ ರಸ್ತೆಯಲ್ಲಿ ಹಿಂದೂ ಯುವ ಸೇನೆಯು ‘ಫಿಷ್‌ ಗಣಪತಿ’ ಮೂರ್ತಿಯನ್ನು ಹಾಗೂ ಇಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ಹಿಂದೂ ಸೈ ಯುವ ವೇದಿಕೆಯಿಂದ ‘ನೀರು ಸಂರಕ್ಷಣೆಯ ಗಣಪತಿ’ ಮೂರ್ತಿ ಪ್ರತಿಷ್ಠಾಪನೆ.

ಪಿ.ಜೆ.ಬಡಾವಣೆಯಲ್ಲಿ ಫ್ರಿನ್ಸ್‌ ವಿನಾಯಕ ಗ್ರೂಪ್‌ನವರು ‘ಸುಬ್ರಮಣ್ಯ ಅವತಾರ ಗಣಪತಿ’ ಮೂರ್ತಿಯನ್ನು ಹಾಗೂ ಕಾಯಿಪೇಟೆಯ ಸ್ವಾಗತ್‌ ಯುವಕರ ಸಂಘ ‘ಯಕ್ಷಗಾನ ಗಣಪತಿ’ ಮೂರ್ತಿ ಪ್ರತಿಷ್ಠಾಪನೆ, ಕೆಟಿಜೆ ನಗರದ ಗಜಾನನ ಯುವಕರ ಸಂಘ ‘ನಟರಾಜ ಗಣಪತಿ’. ಕನ್ಯಕಪರಮೇಶ್ವರಿ ದೇವಸ್ಥಾನ ರಸ್ತೆಯ ವಾಸವಿ ಯುವಜನ ಸಂಘದಿಂದ ‘ಶ್ರೀಕೃಷ್ಣ ಬ್ರಹ್ಮಾಂಡ ದರ್ಶನ’ ರೂಪಕ ಮೂಲಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. 

ಹೀಗೆ ನಗರದ ಹಲವು ಬಡಾವಣೆಗಳಲ್ಲಿ ಹತ್ತಾರು ಬಗೆಯಲ್ಲಿ ವೈವಿಧ್ಯಮಯವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

von: 
Thomas Müller-Lupp